ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ

ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ
ಶೀಲ ಮಾಡತೀರಿ ನಾಡೆಲ್ಲಾ
ತೊಗಲಿನ ಆಟಾ ತಿಳಿಯದು ತಮ್ಮಾ
ತಗಲುಮಾತು ಒಂದು ಚೂರಿಲ್ಲ ||ಪ||

ತೊಗಲಿನೊಳಗೆ ತೊಗಲ್ಹುಟ್ಟತೈತಿ
ಕಾಮನಾಟಾ ಕೇಳೋ ಕಡಿಮೆ ಜಲಾ
ಪಿಂಡರಕ್ತ ಕಾಯದೇಹ ಕಣ್ಣಿಗೆ ಛಾಯಾ
ಕಾಣಿಸುವದು ಈ ತೊಗಲಾ
ಕುಡಗೋಲ ಪಿಡಿದು ಕೂಲಿಮಾಡಿ
ತುಂಬಿಸಬೇಕೋ ಈ ಚೀಲಾ
ಒಂದರಘಳಿಗೀ ಅನ್ನವಿಲ್ಲದಿರೆ
ಸೈಲಬೀಳತೈತ್ಯೋ ಈ ತೊಗಲಾ
||ಇಳವು||
ತೊಗಲಿನ ಉಸಾಬರಿ ನಾನು ಎಷ್ಟು ಮಾಡಬೇಕ
ಬೇಗು ಬೆಳಗು ಸಂಜಿಯಾ ತನಕ
ಸ್ಥಿರವಿಲ್ಲದ ತೊಗಲು ಹುಟ್ಟಿಬಂತು ಸಾವುದಕ
ಗೊತ್ತುಹತ್ತಲಿಲ್ಲೋ ಸವಿ ಸುಖಕ
||ಏರು||
ತೊಗಲಿನ ಸವಿಸುಖ ತೊಗಲು ಬಲ್ಲದಿದು
ರಾತ್ರಿ ಹಗಲು ಹರಿದಾಡೋ ತೊಗಲಾ ||೧||

ಸತ್ತು ಹೋಗಲು ಭೂಮಿಯ ಕಿತ್ತು ಹಾಕತೈತಿ
ಮತ್ತೆ ತೊಗಲು ಜೀವಕಾಧಾರಾ
ತೊಗಲಿನ ಬಾರು ಮಿಣಿ ಜತಿಗೆ ಕಣ್ಣಿ ತೊಗಲ ಮ್ಯಾಡಾರ

ತೊಗಲಿಗೆ ತೊಗಲಾ ಮದುವೆ ಮಾಡಿದರು
ತೊಗಲಿಗೆ ಮಾಡ್ಯಾರೋ ಉಪಕಾರ
ಅರಿಶಿನ ಕುಂಕುಮ ಅರದು ಎರದುಕರ
ತೊಗಲಿಗೆ ಮಾಡ್ಯಾರೋ ಸಿಂಗಾರಾ
||ಇಳವು||
ತೊಗಲಿಗೆ ಮೆಚ್ಚಿ ವೀರಾಧಿವೀರ ಜನರೆಲ್ಲಾ
ಸತ್ತುಹೋದರೆಂಬುವದು ಗುಲ್ಲಾ
ಇಂದ್ರ ಚಂರ್ರ ದೇವತೆ ಋಷಿ
ಮುಳುಗಿ ಹೋದರೋ ಎಲ್ಲಾ
ಇದರಾಟಾ ಯಾರಿಗೂ ತಿಳಿಲಿಲ್ಲಾ
||ಏರು||
ನಾ ಆದರೇನು ನೀ ಆದರೇನು
ಅರಸ ಪ್ರಧಾನಿ ಆದರೋ ತೊಗಲಾ || ೨ ||

ತೊಗಲು ತೊಳಿದುಕರ ನೀರ ಮಡಿಯ ಮಾಡಿ
ಗುಂಡಿಯಂತಿದೋ ಪಿಕನಾಶಿ
ಗಂಧ ವಿಭೂತಿ ತೊಗಲಿಗೆ ಧರಿಸಿ
ಜಾತಿ ಚಾತಿ ಬ್ಯಾರೆಯೆನಿಸಿ
ಜಪತಪವೆಂದು ಸನ್ಯಾಸಿ
ಬೂದಿಯೆಲ್ಲ ಮೈಯಿಗೆ ಪೂಸಿ
ಶಿವಶಿವಯೆಂದು ಶಿವಪೂಜಿ ಮಾಡುತಿ
ತೊಗಲಿನ ಮ್ಯಾಲೆ ಕೂತು ಜಪ ಎಣಿಸಿ
||ಇಳವು||
ಬಂಧು ಬಳಗಯೆಲ್ಲ ಮುಂದು ಹಾಕಿಕೊಂಡು ಬರುತೀರಿ
ತೊಗಲಿನ ಬೀಗರಿರತೀರಿ
ಮಿಗಿಲಾದ ತೊಗಲಿಗೆ ಮಾನ ಮರ್ಯಾದೆ ಮಾಡತೀರಿ
ದಾನ ದಕ್ಷಿಣೆಯನ್ನು ಕೊಡತೀರಿ

|| ಏರು||
ಸಿದ್ದ ಶಿಶುನಾಳಧೀಶನ ದಯೆಯೊಳು
ಬುದ್ಧಿವಂತರು ತಿಳಿಯಿರಿ ತೊಗಲಾ || ೩ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ
Next post ದೇವರಾಟ ಕಣಗಂಡೆ ಸಂಶಿಯೊಳು

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys